ಬಿಜೆಪಿ ಪಾದಯಾತ್ರೆ ತಡೆಯಲ್ಲ: ಅನುಮತಿಯೂ ಕೊಡಲ್ಲ- ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು,ಜುಲೈ,29,2024 (www.justkannada.in): ಮುಡಾ ಹಗರಣದ ವಿರುದ್ದ ಆಗಸ್ಟ್ 3 ರಿಂದ ಬೆಂಗಳೂರಿನಿಂದ ಮೈಸೂರಿಗೆ  ವಿಪಕ್ಷ ಬಿಜೆಪಿ, ಜೆಡಿಎಸ್ ಹಮ್ಮಿಕೊಂಡಿರುವ ಪಾದಯಾತ್ರೆಗೆ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಕಿಡಿಕಾರಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಡಾ.ಜಿ.ಪರಮೇಶ್ವರ್,  ಈ ಹಿಂದೆ ಬಿಜೆಪಿ ಅವಧಿಯಲ್ಲಿ ಕಾಂಗ್ರೆಸ್ ಪಾದಯಾತ್ರೆ ಮಾಡಿತ್ತು. ಆಗ ಬಿಜೆಪಿಯವರು ನಮ್ಮ ಪಾದಯಾತ್ರೆಗೆ ಅನುಮತಿ ನೀಡಿದ್ರಾ ನಾವು ಅವಕಾಶ ಇಲ್ಲದೇ ಪಾದಯಾತ್ರೆ ಮಾಡಲಿಲ್ಲವಾ..? ಹೀಗಾಗಿ ಈಗಲೂ ಬಿಜೆಪಿ ಪಾದಯಾತ್ರೆ ತಡೆಯಲ್ಲ ಪಾದಯಾತ್ರೆಗೆ ಅನುಮತಿಯೂ ಕೊಡಲ್ಲ ಎಂದರು.

Key words: BJP, Padayatra, permission, Minister, Parameshwar