ಅದ್ಧೂರಿ-2 ಉಪೇಂದ್ರ ಅಣ್ಣನ ಮಗ ಹೀರೋ !

ಬೆಂಗಳೂರು, ಮೇ 14, 2019 (www.justkannada.in): ‘ಅದ್ದೂರಿ’ ಚಿತ್ರಕ್ಕೆ ಬಂಡವಾಳ ಹೂಡಿದ್ದ ಶಂಕರ್ ರೆಡ್ಡಿಯವರು ಇದೀಗ ‘ಅದ್ದೂರಿ-2’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಚಿತ್ರಕ್ಕೆ ನಾಯಕನಟರಾಗಿ ರಿಯಲ್ ಸ್ಟಾರ್ ಉಪೇಂದ್ರರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಟಿಸುತ್ತಿದ್ದಾರೆ. ಇವರು ಈ ಮೊದಲು ‘ಸೆಕೆಂಡ್ ಹಾಫ್’ ಚಿತ್ರದಲ್ಲಿ ನಟಿಸಿದ್ದರು.

ನವ ನಿರ್ದೇಶಕ ವೆಂಕಟೇಶ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ವಿಭಿನ್ನವಾದ ಕಥೆಯಿದ್ದು, ಸದ್ಯ ನಿರಂಜನ್ ‘ನಮ್ ಹುಡುಗ್ರು ಕಥೆ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಫಿಟ್ ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿರುವ ಅವರು 6 ಪ್ಯಾಕ್ ಗಾಗಿ ಜಿಮ್ಲಿ ಹಾಗೂ ಜಿಮ್ನಾಸ್ಟಿಕ್ ಮಾಡುತ್ತಿದ್ದಾರೆ.