MYSORE LOKAYUKTHA:  ನೂತನ ಎಸ್ಪಿಯಾಗಿ ಟಿ.ಜೆ.ಉದೇಶ್‌ ಅಧಿಕಾರ ಸ್ವೀಕಾರ.

MYSORE LOKAYUKTHA: TJ Udesh takes charge as new SP.

 

ಮೈಸೂರು, ಆ.20,2024: (www.justkannada.in news): ಮೈಸೂರು ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಟಿ.ಜೆ.ಉದೇಶ್‌ ಅಧಿಕಾರ ಸ್ವೀಕಾರ.

ನಿರ್ಗಮಿತ ಲೋಕಾಯುಕ್ತ ಎಸ್ಪಿ ಸುರೇಶ್‌ ಬಾಬು ಅವರಿಂದ ಅಧಿಕಾರ ಹಸ್ತಾಂತರ. ಇಂದು ನಡೆದ ಸರಳ ಸಮಾರಂಭದಲ್ಲಿ ಮೈಸೂರು ಜಿಲ್ಲಾ ಲೋಕಾಯುಕ್ತ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ಟಿ.ಜೆ.ಉದೇಶ್.‌ ಈ ಮೊದಲು ಚಾಮರಾಜನಗರದ ಅಡಿಷನಲ್‌ ಸೂಪರಿಂಡೆಂಟ್‌ ಆಫ್‌ ಪೊಲೀಸ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಹೆಚ್ಚಿದ ಜವಾಬ್ದಾರಿ:

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯಪಾಲರು ತನಿಖೆಗೆ ಆದೇಶಿಸಿದ್ದಾರೆ. (ಸದ್ಯ ಹೈಕೋರ್ಟ್‌ ಈ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ವಿಚಾರಣೆಯನ್ನು ಆ. ೨೯ ಕ್ಕೆ ನಿಗಧಿಪಡಿಸಿದೆ).

ಒಂದು ವೇಳೆ ಮುಂಬರುವ ದಿನಗಳಲ್ಲಿ ಹೈಕೋರ್ಟ್‌ ತಡೆಯಾಜ್ಞೆ ತೆರವುಗೊಳಿಸಿದರೆ, ಆಗ ಮುಖ್ಯಮಂತ್ರಿಗಳ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್.ಐ.ಆರ್.‌ ದಾಖಲಿಸಿಕೊಂಡು ತನಿಖೆ ನಡೆಸುವ ಜಾವಾಬ್ದಾರಿ ಲೋಕಾಯುಕ್ತ ಪೊಲೀಸರದ್ದು. ಆಗ ಮೈಸೂರು ಲೋಕಾಯುಕ್ತ ಎಸ್ಪಿ ಅವರ ಜವಾಬ್ದಾರಿ ತುಸು ಹೆಚ್ಚೇ ಇರುತ್ತದೆ.

KEY WORDS: MYSORE, LOKAYUKTHA, TJ Udesh, takes charge, as new SP.