ರಾಜಕೀಯ ಪಿತೂರಿಯಿಂದ ನನ್ನ ವಿರುದ್ದ ದೂರು: ಕಾನೂನು ಮೊರೆ ಹೋಗುವುದಾಗಿ ತಿಳಿಸಿದ ಶಾಸಕ ಮುನಿರತ್ನ

ಬೆಂಗಳೂರು,ಸೆಪ್ಟಂಬರ್,14,2024 (www.justkannada.in): ರಾಜಕೀಯ ಪಿತೂರಿಯಿಂದ ನನ್ನ ವಿರುದ್ದ ದೂರು ನೀಡಿದ್ದಾರೆ.  ನನ್ನ ತೇಜೊವಧೆ ಮಾಡಲು ಈ ರೀತಿ ಆರೋಪ ಮಾಡಿದ್ದಾರೆ. ನಾನು ಕಾನೂನಿನ ಮೊರೆ ಹೋಗುತ್ತೇನೆ ಎಂದು ಬಿಜೆಪಿ ಶಾಸಕ ಮುನಿರತ್ನ ತಿಳಿಸಿದರು.

ಇಂದು ತಮ್ಮ ವಿರುದ್ದ ದೂರು ದಾಖಲಾದ ಬೆನ್ನಲ್ಲೆ ನಾಪತ್ತೆಯಾಗಿದ್ದಾರೆಂದು ವರದಿಯಾದ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಮುನಿರತ್ನ, ನಾನು ಎಲ್ಲೂ ನಾಪತ್ತೆಯಾಗಿಲ್ಲ. 7ರಿಂದ 8 ವರ್ಷದಿಂದ ಎಷ್ಟು ಗುತ್ತಿಗೆದಾರರಿದ್ದಾರೆ. ಇದುವರೆಗೂ ಯಾವುದೇ ಗುತ್ತಿಗೆದಾರ ದೂರು ನೀಡಿಲ್ಲ.  ಚಲುವರಾಜು ತಿಂಗಳ ಹಿಂದೆ ನನ್ನ ಬಳಿ ಬಂದು  ಯಾರೋ ಹಲ್ಲೆ ಮಾಡಿದ್ದಾರೆ ಎಂದಿದ್ದರು.  ಈಗ ಯಾರು ಹಲ್ಲೆ ನಡೆಸಿದ್ದರೋ ಅವರ ಜೊತೆ ಕುಳಿತು ಆರೋಪಿಸುತ್ತಿದ್ದಾರೆ. ನನ್ನನ್ನೇ ದೇವರು ಅಂತಾ ಚಲುವರಾಜ ಹೇಳುತ್ತಿದ್ದ. ಒಂದು ತಿಂಗಳ ಹಿಂದೆಯೇ ನನ್ನನ್ನು ಚಲುವರಾಜು ಹೊಗಳಿದ್ದಾರೆ ಎಂದರು.

ನಾನು ಕಾಂಗ್ರಸ್ ಬಿಟ್ಟು ಬಂದಾಗಿನಿಂದ ಪಿತೂರಿ ಮಾಡುತ್ತಿದ್ದಾರೆ.  ಈ ಬಗ್ಗೆ ಇಡೀ ರಾಜ್ಯಕ್ಕೆ ಗೊತ್ತಿದೆ. ಚುನಾವಣೆ ವೇಳೆಯೂ ಏನೆಲ್ಲಾ ಪ್ರಯತ್ನ ಮಾಡಿದ್ರು . ನನ್ನ ವಿರುದ್ದ ದಲಿತ ಸಮುದಾಯವನ್ನ ಎತ್ತಿ ಕಟ್ಟುವ  ಕೆಲಸ ಮಾಡಿದ್ದಾರೆ. ನನ್ನಿಂದ ರಾಜೀನಾಮೆ ಕೊಡಿಸಿ ಅವರ ಕಡೆಯವರನ್ನ ಗೆಲ್ಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಎಂದು ಆರೋಪಿಸಿದರು.

ನನ್ನ ಬಾಯಿ ಶುದ್ಧವಾಗಿಯೇ ಇದೆ. ಸಿಎಂ ಕಡೆಯವರು ಕುತಂತ್ರ ನಿಲ್ಲಿಸಲಿ

ನನ್ನದು ವಿಡಿಯೋ ಮಾಡಿಸಲು ಆಗಿಲ್ಲ. ಹೀಗಾಗಿ ಆಡಿಯೋ ಮಾಡಿಸಿದ್ದಾರೆ. ನನ್ನ ಬಾಯಿ ಶುದ್ಧವಾಗಿಯೇ ಇದೆ. ಸಿಎಂ ಕಡೆಯವರು ಕುತಂತ್ರ ನಿಲ್ಲಿಸಲಿ . 7 ರಿಂದ 8 ವರ್ಷದಿಂದ ದುಡ್ಡು ಕೇಳದಿರೋ ವ್ಯಕ್ತಿ ಈಗ ಕೇಳ್ತೀನಾ?  ಎಂದು ಮುನಿರತ್ನ ಪ್ರಶ್ನಿಸಿದರು.

Key words: Complaint, political conspiracy, MLA Muniratna