ಸುಪ್ರೀಂ ಕೋರ್ಟ್ ಗೆ ಹೋದ್ರೂ ನಿಮ್ಮ ಪರ ತೀರ್ಪು ಬರಲ್ಲ: ರಾಜೀನಾಮೆ ಕೊಡಿ – ಹೆಚ್.ವಿಶ್ವನಾಥ್ ಒತ್ತಾಯ

ಮೈಸೂರು,ಸೆಪ್ಟಂಬರ್,24,2024 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ನೀಡಿದ್ದ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್ ತೀರ್ಪನ್ನು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಸ್ವಾಗತಿಸಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಹೆಚ್.ವಿಶ್ವನಾಥ್,  ನೀವು ಸುಪ್ರೀಂ ಕೋರ್ಟ್ ಗೆ ಹೋದ್ರು ನಿಮ್ಮ ಪರ ತೀರ್ಪು ಬರಲ್ಲ. ಹಾಗಾಗಿ ರಾಜೀನಾಮೆ ಕೊಡಿ ಎಂದು ಸಿಎಂ ಸಿದ್ದರಾಮಯ್ಯಗೆ ಒತ್ತಾಯಿಸಿದರು.

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಿ. ನಾನು ಈ ಹಿಂದೆಯೇ ಹೇಳಿದ್ದೆ ಮುಡಾದ ಗೇಟ್ ಬಳಿ ಪ್ರೆಸ್ ಮೀಟ್ ಮಾಡಿದ್ದೆ. 14 ಸೈಟುಗಳನ್ನು ವಾಪಸ್ ಕೊಡಿ ತನಿಖೆ ಮಾಡಿಸಿ ಎಂದು ಸಿದ್ದರಾಮಯ್ಯಗೆ ಮನವಿ ಮಾಡಿದ್ದೆ. ಯಾರೋ ನಿಮ್ಮ ಕೈಕೆಳಗೆ ಸಹಿ ಹಾಕಿಸಿ ಮೋಸ ಮಾಡಿದ್ದಾರೆ ಎಂದಿದ್ದೆ. ನಾನು ಹೇಳಿದ ಹಾಗೆ ತನಿಖೆ ಮಾಡಿದ್ರೆ ಎಲ್ಲಾ ಸತ್ಯ ಹೊರ ಬರುತ್ತಿತ್ತು. ಎಲ್ಲ ಪಕ್ಷಗಳ ಕಳ್ಳರು ಸಿಕ್ಕಿ ಹಾಕಿಕೊಳ್ಳುತ್ತಿದ್ದರು. ನನ್ನ ಮಾತು ಧಿಕ್ಕರಿಸಿ ನಿಮ್ಮ ಸುತ್ತ ಮುತ್ತ ಇರುವವರ ಮಾತು ಕೇಳಿದ್ರಿ. ಈಗ ಕೋರ್ಟ್ ತೀರ್ಪು ಬಂದಿದೆ. ನೀವು ಸುಪ್ರೀಂ ಕೋರ್ಟ್ ಗೆ ಹೋದ್ರು ನಿಮ್ಮ ಪರ ತೀರ್ಪು ಬರಲ್ಲ ಎಂದು ಹೆಚ್.ವಿಶ್ವನಾಥ್ ಹೇಳಿದ್ದಾರೆ.

Key words: H. Vishwanath, urges, CM Siddaramaiah, resign