ರಾಜೀನಾಮೆಗೆ ಮುಹೂರ್ತ ಫಿಕ್ಸ್ ಆಗಿರೋದು ಸಿಎಂ ಸಿದ್ದರಾಮಯ್ಯಗೆ ಅಲ್ಲ, ಬಿವೈ ವಿಜಯೇಂದ್ರಗೆ- ಸಚಿವ ಮಧು ಬಂಗಾರಪ್ಪ

ಬೆಂಗಳೂರು,ಅಕ್ಟೋಬರ್,14,2024 (www.justkannada.in):  ರಾಜೀನಾಮೆಗೆ ಮುಹೂರ್ತ ಫಿಕ್ಸ್ ಆಗಿರೋದು ಸಿಎಂ ಸಿದ್ದರಾಮಯ್ಯಗೆ ಅಲ್ಲ. ಬಿವೈ ವಿಜಯೇಂದ್ರ ಕೆಳಗಿಳಿಸಲು ಫಿಕ್ಸ್ ಆಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಟಾಂಗ್ ಕೊಟ್ಟರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಹಿಂಸೆ ತಡೆಯದೇ ಸಿಎಂ ಪತ್ನಿ ಸೈಟ್ ವಾಪಸ್ ನೀಡಿದ್ದಾರೆ.  ಬಿಎಸ್ ಯಡಿಯೂರಪ್ಪ ಯಾಕೆ ಜೈಲಿಗೆ ಹೋದ್ರು ಅಂತಾ ಹೇಳಲಿ ವಿಜಯೇಂದ್ರ ಮಾಡಿದ ಕೆಲಸ ಎಲ್ಲರಿಗೂ ಗೊತ್ತು. ಪ್ರೇರಣಾ ಟ್ರಸ್ಟ್ ಗೆ ಹೇಗೆ ಹಣ ಬಂತು ಎಂದು ಹೇಳಲಿ ಎಂದು ಬಿಜೆಪಿಗೆ ಕುಟುಕಿದರು.

ಬರ ಬಂದ್ರೂ ಸಿದ್ದರಾಮಯ್ಯ ಕಾರಣ ಅಂತಾರೆ.  ಮಳೆ ಜಾಸ್ತಿ ಆದ್ರೂ ಸಿದ್ದರಾಮಯ್ಯ ಕಾರಣ ಅಂತಾರೆ. ಪ್ಲೇಟ್ ಚೇಂಜ್ ಮಾಡುವುದರಲ್ಲಿ ಬಿಜೆಪಿ ಎತ್ತಿದ ಕೈ. ದಸರಾ ಒಳಗೆ ಸಿಎಂ ರಾಜೀನಾಮೆ ಎಂದಿದ್ದರು.  ಈಗ ಅದು ದೀಪಾವಳಿಗೆ ಹೋಗುತ್ತೆ. ನಂತರ ಮುಂದಿನ ವರ್ಷಕ್ಕೆ ಹೋಗುತ್ತೆ ಎಂದು ಮಧು ಬಂಗಾರಪ್ಪ ಲೇವಡಿ ಮಾಡಿದರು.

Key words: deadline, resignation, BY Vijayendra, Minister, Madhu Bangarappa