ನನ್ನ ಕೇಸ್ ವಾಪಸ್ ಪಡೆದಿದ್ರೆ ರಾಜೀನಾಮೆ ನೀಡಿ ರಾಜಕೀಯ ಸನ್ಯಾಸತ್ವ ಸ್ವೀಕಾರ- ಸಚಿವರಿಗೆ ಸಿ.ಟಿ ರವಿ ಸವಾಲು

ಚಿಕ್ಕಮಗಳೂರು,ಅಕ್ಟೋಬರ್,15,2024 (www.justkannada.in):  ತಮ್ಮ ಮೇಲಿನ ಕೇಸ್ ವಾಪಸ್ ವಿಚಾರ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿರುವ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ, ನನ್ನ ಕೇಸ್ ವಾಪಸ್ ಪಡೆದಿದ್ರೆ ರಾಜೀನಾಮೆ ನೀಡಿ ರಾಜಕೀಯ ಸನ್ಯಾಸತ್ವ ಸ್ವೀಕಾರ ಮಾಡುತ್ತೇನೆ ಎಂದಿದ್ದಾರೆ.

ಈ ಕುರಿತು ಮಾತನಾಡಿದ ಸಿ.ಟಿ ರವಿ, ಚಾಲೆಂಜ್ ಮಾಡ್ತೀನಿ ನನ್ನ ಮೇಲೆ ಯಾವ ಕೇಸ್ ಇದೆ ಯಾವ ಕೇಸ್ ವಾಪಸ್ ಪಡೆದಿದ್ದರೆಂದು ಹೇಳಲಿ. ನಾನು ಕೇಸ್ ವಾಪಸ್ ಪಡೆಯರಿ ಎಂದು ಅರ್ಜಿ ಹಾಕಿದ್ನಾ.  ಕೇಸ್ ವಾಪಸ್ ಪಡೆದಿದ್ದರೆ ರಾಜೀನಾಮೆ ನೀಡಿ ರಾಜಕೀಯ ಸನ್ಯಾಸತ್ವ ಸ್ವೀಕಾರ ಮಾಡುತ್ತೇನೆ.  ಕೇಸ್ ವಾಪಸ್ ಸುಳ್ಳಾದರೇ  ಸಚಿವ ಪ್ರಿಯಾಂಕ್ ಖರ್ಗೆ  ರಾಜೀನಾಮೆ ನೀಡಲಿ. ಧೈರ್ಯವಿದ್ದರೆ ನನ್ನ ಚಾಲೇಂಜ್ ಸ್ವೀಕಾರ ಮಾಡಲಿ ಎಂದು ಸವಾಲು ಹಾಕಿದರು. ಸುಳ್ಳು ಹೇಳಿರುವ ಸಚಿವರು ಕ್ಷಮೆ ಕೇಳಬೇಕು ಎಂದು ಸಿ.ಟಿ ರವಿ ಆಗ್ರಹಿಸಿದರು.

ಬಿಜೆಪಿಗೆ ಜಗ್ಗಲ್ಲ ಬಗ್ಗಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ಕೊಟ್ಟ ಸಿಟಿ ರವಿ,  ಜಗ್ಗಲ್ಲ ಬಗ್ಗಲ್ಲ ಎಂದವರು ಮಣ್ಣಲ್ಲಿ ಮಣ್ಣಲ್ಲಿ ಮಣ್ಣಾಗಿದ್ದಾರೆ.  ಜನಾಭಿಪ್ರಾಯಕ್ಕೆ ತಲೆ ಭಾಗಲೇಬೇಕು ಎಂದರು.

Key words: CT Ravi, challenges, Minister,  resign, case,  withdrawn