ಮುಡಾ ಹಗರಣ ಸಿವಿಲ್ ಮ್ಯಾಟ್ರೂ ರೀ: ಇದನ್ನ ವಿಶ್ವ ನೋಡೋ ಹಾಗೆ ಮಾಡೋದಾ? ಸಚಿವ ಪರಮೇಶ್ವರ್ ಗರಂ

ತುಮಕೂರು,ಅಕ್ಟೋಬರ್,19,2024 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ವಿಪಕ್ಷಗಳು ಒತ್ತಾಯಿಸಿವೆ. ಈ ನಡುವೆ ನಿನ್ನೆಯಿಂದ ಮುಡಾ ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು ಇದು ಸಾಕಷ್ಟು ಸುದ್ದಿಯಾಗಿದೆ.

ಈ ಕುರಿತು ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮುಡಾ ಹಗರಣ ಸಿವಿಲ್ ಮ್ಯಾಟ್ರೂ ರೀ: ಇದನ್ನ ವಿಶ್ವ ನೋಡೋ ಹಾಗೆ ಮಾಡೋದಾ? ಎಂದು ಗರಂ ಆಗಿದ್ದಾರೆ.

ಅಮೇರಿಕಾದಲ್ಲಿ ಬರಾಕ್ ಒಬಾಮಾ ಇದ್ದಾಗಲೂ ಹೀಗೆ ಮಾಡಲಿಲ್ಲ. ಜನರಿಗೆ ತಪ್ಪು ಕಲ್ಪನೆ ಬರುವ ರೀತಿ ಮಾಡಿದ್ದಾರೆ .ಮುಡಾ ಪ್ರಕರಣ ಸಿವಿಲ್ ಮ್ಯಾಟರ್. ಸಿಎಂ ಸಿದ್ದರಾಮಯ್ಯ ಯಾಕೆ ರಾಜೀನಾಮೆ ಕೊಡಬೇಕು ಎಂದು ಪರಮೇಶ್ವರ್ ಪ್ರಶ್ನಿಸಿದ್ದಾರೆ.

Key words: Muda case, ED, Raid, Minister, Parameshwar