ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ- ಸಂಸದ ಯದುವೀರ್ ಆಗ್ರಹ

ಮೈಸೂರು, ಅಕ್ಟೋಬರ್,19,2024 (www.justkannada.in): ಮುಡಾದಲ್ಲಿ ಐದು ಸಾವಿರ ಕೋಟಿ ಹಗರಣ ಆಗಿದೆ. ಸಿದ್ದರಾಮಯ್ಯ ಕುಟುಂಬದವರು ನೇರ ಫಲಾನುಭವಿ ಆಗಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ರಾಜಿನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಗ್ರಹಿಸಿದರು.

ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಯದುವೀರ್, ಎರಡು ತಿಂಗಳಲ್ಲಿ ಬಹಳಷ್ಟು ಬೆಳವಣಿಗೆ ಆಗಿದೆ. ಮುಡಾದಲ್ಲಿ ಐದು ಸಾವಿರ ಕೋಟಿ ಹಗರಣ ಆಗಿದೆ. ಸಿದ್ದರಾಮಯ್ಯ ಕುಟುಂಬದವರು ನೇರ ಫಲಾನುಭವಿ ಆಗಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು. ಸಾವಿರಾರು ಕೋಟಿ ಮೌಲ್ಯದ ಹಗರಣ ಆಗಿರುವ ಕಾರಣ ಸ್ವತಂತ್ರವಾದ ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

62 ಕೋಟಿ ಕೊಟ್ಟರೆ ಸೈಟ್ ಕೊಡುವೆ ಅಂತ ಸಿದ್ದರಾಮಯ್ಯ ಅವರೆ ಹೇಳಿದ್ದಾರೆ. ಈ ಹಿನ್ನೆಲೆ ಇಡಿ ತನಿಖೆ ಸೂಕ್ತವಾಗಿದೆ. ಮುಡಾ, ತಾಲ್ಲೂಕು ಕಚೇರಿಗೆ ದಾಖಲಾತಿ ಕೊಡುವಂತೆ ಕೇಳಿದರೂ ಕೊಡದ ಕಾರಣ ಇಡಿ ದಾಳಿ ಮಾಡಿದೆ. ಈ ಹೋರಾಟದಲ್ಲಿ ನಾವು ಕಾನೂನಾತ್ಮಕವಾಗಿ ಮುಂದುವರೆಯುತ್ತೇವೆ. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆಗೆ ಒಳಪಡಬೇಕು. ಇಡಿ ಟ್ರ್ಯಾಕ್ ರೆಕಾರ್ಡ್ ಚೆನ್ನಾಗಿರುವ ಕಾರಣ ಸ್ವತಂತ್ರ ತನಿಖೆ ಅಗತ್ಯ. 14 ಸೈಟ್ ಮಾತ್ರವಲ್ಲದೆ ಎಲ್ಲಾ ಅಕ್ರಮ ಸೈಟ್ ಬಗ್ಗೆ ಕೂಡ ತನಿಖೆ ಆಗಬೇಕು. ಸಿಬಿಐ ತನಿಖೆಗೆ ಆಗ್ರಹಿಸಿ ರಾಜ್ಯಪಾಲರು ಮತ್ತು ರಾಷ್ಟ್ರಪತಿಗೆ ದೂರು ನೀಡುವ ಬಗ್ಗೆ ಮುಂದಾಗುತ್ತೇವೆ ಎಂದು ತಿಳಿಸಿದರು.

ಮೈಸೂರು ವಿಮಾನ ನಿಲ್ದಾಣ ಮೇಲ್ದರ್ಜೆಗೇರಿದರೆ ಹೆಚ್ಚು ವಿಮಾನ ಹಾರಾಟ ಆಗುತ್ತದೆ. ಆದರೂ ಹೆಚ್ಚು ಬೇಡಿಕೆ ಇರುವ ಎಟಿಆರ್ ವಿಮಾನ. ಗೋವಾ, ಕೊಚ್ಚಿನ್ ಗೆ ಹಾರಾಟ ಮಾಡಲು ಕೇಂದ್ರ ವಿಮಾನಯಾನ ಖಾತೆ ಸಚಿವರಿಗೆ ಮನವಿ ಮಾಡಿದ್ದೇನೆ. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಂಸದ ಯದುವೀರ್ ತಿಳಿಸಿದರು.

Key words: CM Siddaramaiah, resign,  investigation – MP Yaduveer, demands