ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆ ಪ್ರಬಲ ಅಭ್ಯರ್ಥಿ ಇಲ್ಲ- ಸಿ.ಟಿ ರವಿ ಟೀಕೆ

ಬೆಂಗಳೂರು,ಅಕ್ಟೋಬರ್, 22,2024 (www.justkannada.in): ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆ ಪ್ರಬಲ ಅಭ್ಯರ್ಥಿ ಇಲ್ಲ ಎಂದು ವಿಧಾನಪರಿಷತ್ ಸದಸ್ಯ  ಸಿ.ಟಿ ರವಿ ಟೀಕಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಟಿ ರವಿ, ಚನ್ನಪಟ್ಟಣದಲ್ಲಿ ಎನ್ ಡಿಎ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ. ಆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಪ್ರಬಲ ಅಭ್ಯರ್ಥಿ ಇಲ್ಲ ಚನ್ನಪಟ್ಟಣ  ಸೇಫ್ ಅನ್ನಿಸಿದರೆ ಡಿಕೆ ಸುರೇಶ್ ಕಣಕ್ಕಿಳಿಸುತ್ತಿದ್ದರು. ಆದರೆ  ಸೇಫ್ ಕ್ಷೇತ್ರ ಅಲ್ಲ ಅಂತಾ ಪ್ರಬರಲನ್ನ ಕಣಕ್ಕಿಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.

ಸಿಪಿ ಯೋಗೇಶ್ವರ್ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಸಿ.ಟಿ ರವಿ, ಸಿಪಿ ಯೋಗೇಶ್ವರ್ ಗೆ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ ಎಂದಿದ್ದೇನೆ ಎಂದು ಸಿಟಿ ರವಿ ಕಿಡಿ ಕಾರಿದರು.

Key words: Congress, not, strong candidate, Channapatnam, CT Ravi