ಸಿ.ಪಿ ಯೋಗೇಶ್ವರ್ ಕಾಂಗ್ರೆಸ್ ಗೆ ಹೋಗಿ ರಾಜಕೀಯ ಭವಿಷ್ಯ ಹಾಳು ಮಾಡಿಕೊಂಡಿದ್ದಾರೆ- ಆರ್.ಅಶೋಕ್

ಬೆಂಗಳೂರು,ಅಕ್ಟೋಬರ್,23,2024 (www.justkannada.in): ಸಿಪಿ ಯೋಗೇಶ್ವರ್ ಕಾಂಗ್ರೆಸ್ ಗೆ ಸೇರ್ಪಡೆಯಾಗಿ ರಾಜಕೀಯ ಭವಿಷ್ಯ ಹಾಳು ಮಾಡಿಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟಾಂಗ್ ಕೊಟ್ಟಿದ್ದಾರೆ.

ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಕುರಿತು ಮಾತನಾಡಿದ ಆರ್.ಅಶೋಕ್, ಟಿಕೆಟ್ ಕೊಡದಿದ್ದರೇ ಬೇರೆ ಪಕ್ಷಕ್ಕೆ ಹೋಗುವುದು ನಿಷ್ಠೆ ಅಲ್ಲ. ನಮ್ಮ ಪಕ್ಷದಲ್ಲಿ ವೋಟ್ ಎಷ್ಟಿತ್ತೋ ಅಷ್ಟು ಇರುತ್ತವೆ. ಸಿಪಿ ಯೋಗೇಶ್ವರ್ ರನ್ನು ಉಳಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡಿದವು. ಸಿಪಿವೈ ಎಲ್ಲಾ ಪಕ್ಷದವರ ಜೊತೆ ಲಿಂಕ್ ಇಟ್ಟುಕೊಂಡಿದ್ದವರು. ನಾನು ಪ್ರಹ್ಲಾದ್ ಜೋಶಿ ಸಹ ಜೆಡಿಎಸ್ ಟಿಕೆಟ್ ಅಂತಾ ಹೇಳಿದ್ದವು ಹೆಚ್ ಡಿ ಕುಮಾರಸ್ವಾಮಿ  ಅವರೇ ಟಿಕೆಟ್ ಬಗ್ಗೆ ತೀರ್ಮಾನ ಮಾಡಬೇಕೆಂದು ಹೇಳಿದ್ದವು. ಕುಮಾರಸ್ವಾಮಿ ಜೆಡಿಎಸ್ ಚಿಹ್ನೆಯಿಂದಲೇ ನಿಲ್ಲಿ ಎಂದಿದ್ದರು. ಆದರೆ ಸಿಪಿ ಯೋಗೇಶ್ವರ್ ಇದನ್ನು ತಿರಸ್ಕರಿಸಿ ಕಾಂಗ್ರೆಸ್ ಗೆ ಹೋಗಿದ್ದಾರೆ.  ಇದು ಪಕ್ಷಕ್ಕೆ ದ್ರೋಹ ಬಗೆದಂತೆ ಎಂದು ಕಿಡಿಕಾರಿದರು.

ಬಿಜೆಪಿ ಜೆಡಿಎಸ್ ಸಿಂಬಲ್ ಅಂತಲ್ಲ ಎನ್ ಡಿಎ ಗೆಲ್ಲುವುದು ಮುಖ್ಯ . ಸಿಪಿ ಯೋಗೇಶ್ವರ್ ಗೆ ಟಿಕೆಟ್ ಕೊಡಿಸಲು ಪ್ರಯತ್ನ ಮಾಡಿದ್ದವು . ಆದರೆ ಸಿಪಿವೈ ಕಾಂಗ್ರೆಸ್ ಗೆ ಹೋಗಿ ರಾಜಕೀಯ ಭವಿಷ್ಯ ಹಾಳು ಮಾಡಿಕೊಂಡಿದ್ದಾರೆ. ಸಿಪಿವೈ ಹೋಗಿದ್ದರಿಂದ ಬಿಜೆಪಿಗೆ ಸಮಸ್ಯೆ ಇಲ್ಲ. ಜೆಡಿಎಸ್ ನಿಂದ ಯಾರೇ ನಿಂತರೂ ಗೆಲ್ಲಿಸುತ್ತೇವೆ ಎಂದು ಆರ್ ಅಶೋಕ್ ತಿಳಿಸಿದರು.

Key words: CP Yogeshwar, Congress, join, R. Ashok