ಅಪರಿಚಿತ ಮುಸುಕುದಾರಿಯಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ: ಪ್ರಕರಣ ದಾಖಲು

ಮೈಸೂರು,ಅಕ್ಟೋಬರ್,24,2024 (www.justkannada.in): ಯುವಕನ ಮೇಲೆ ಅಪರಿಚಿತ ಮುಸುಕುದಾರಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನಲ್ಲಿ ನಡೆದಿದೆ.

ನರಸೀಪುರ ಪಟ್ಟಣದ ಭಗವಾನ್ ಟಾಕೀಸ್ ವೃತ್ತದಲ್ಲಿ ಈ  ಘಟನೆ ನಡೆದಿದೆ.  ದಿನಕರ್ (35) ವರ್ಷ ಹಲ್ಲೆಗೊಳಗಾದ ಯುವಕ. ದಿನಕರ್ ನರಸೀಪುರ ತಾಲ್ಲೂಕಿನ ಆಲಗೂಡು ಗ್ರಾಮದ ನಿವಾಸಿಯಾಗಿದ್ದು.

ಮುಸುಕು ಧರಿಸಿ ಬೈಕ್ ನಲ್ಲಿ ಬಂದ  ಅಪರಿಚಿತ ವ್ಯಕ್ತಿಗಳು  ದಿನಕರ್ ಮೇಲೆ ಹಲ್ಲೆ ಮಾಡಿ  ಅಲ್ಲಿಂದ ಪರಾರಿಯಾಗಿದ್ದಾರೆ. . ಸ್ಥಳಕ್ಕೆ ಟಿ. ನರಸೀಪುರ ಠಾಣಾ ಪೋಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. . ಈಕುರಿತು ಟಿ ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: assault, youth, assailant, mysore