ಇದು ಕೇವಲ ಆಂಧ್ರ, ಬಿಹಾರ ಬಜೆಟ್ – ಡಿಸಿಎಂ ಡಿಕೆ ಶಿವಕುಮಾರ್ ಟೀಕೆ

ಬೆಂಗಳೂರು,ಜುಲೈ,23,2024 (www.justkannada.in):  ಕೇಂದ್ರ ಸರ್ಕಾರದಿಂದ ಇಂದು ಮಂಡನೆಯಾದ ಬಜೆಟ್ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಟೀಕೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್,  ನಿರ್ಮಲಾ ಕೇವಲ ಬಿಹಾರ ಆಂಧ್ರದ ಕಡೆ  ಗಮನ ಸೆಳೆದಿದ್ದಾರೆ. ಸೀತರಾಮನ್ ನಮ್ಮ ಗಮನ ಸೆಳೆಯಲಿಲ್ಲ ಕಾಂಗ್ರೆಸ್  ಇಂಡಿಯಾ ಕೂಟ ಿರುವ ರಾಜ್ಯಗಳ ಕಡೆ ಗಮನ ಹರಿಸಿಲ್ಲ ಎಂದರು.

ಸಚಿವ ನಿರ್ಮಲಾ ಬಗ್ಗೆ ಬಹಳ ನಿರೀಕ್ಷೆ ಇತ್ತು ನಮ್ಮ ನಿರೀಕ್ಷೆ ಹುಸಿಗೊಳಿಸಿದ್ದಾರೆ ಇದು ಕೇವಲ ಆಂಧ್ರ ಬಿಹಾರ ಬಜೆಟ್  ಕಾಂಗ್ರೆಸ್ ಸರ್ಕಾರವಿರುವ ರಾಜ್ಯಗಳನ್ನ ಗಮನಿಸಿಲ್ಲ. ತಮ್ಮ ಸರ್ಕಾರ ಉಳಿಸಿಕೊಳ್ಳಲು ಕೇವಲ ಬಿಹಾರಕ್ಕೆ ಆಂಧ್ರಕ್ಕೆ ಗಮನ ಹರಿಸಿದ್ದಾರೆ ಅಷ್ಟೇ ಎಂದರು.

Keywords Andhra, Bihar budget – DCM .DK Shivakumar