BREAKING : ಪ್ರಸಾದ್‌ ಅಳಿಯನಿಗೂ ಟಿಕೆಟ್‌ ಇಲ್ಲ, ಪ್ರತಾಪ್‌ ಗೂ ಟಿಕೆಟ್‌ ಇಲ್ಲ..

bjp ̲ mp ̲ election ̲ ticket 

ಬೆಂಗಳೂರು, ಮಾ.೧೩, ೨೦೨೪ :  ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ.

2ನೇ ಪಟ್ಟಿಯಲ್ಲಿ 72 ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ.  ರಾಜ್ಯದ 20 ಕ್ಷೇತ್ರಗಳಿಗೆ ಕಮಲ ಕಲಿಗಳ ಘೋಷಣೆ. ನಿರೀಕ್ಷೆಯಂತೆ ಕೆಲ ಹಾಲಿ ಸಂಸದರಿಗೆ ತಪ್ಪಿದ ಟಿಕೆಟ್.‌ ಅಚ್ಚರಿ ಬೆಳವಣಿಗೆಯಲ್ಲಿ ಚಾಮರಾಜನಗರದ ಹಾಲಿ ಸಂಸದ ಶ್ರೀನಿವಾಸ ಪ್ರಸಾದ್‌ ಅವರ ಅಳಿಯನಿಗೂ ಟಿಕೆಟ್‌ ಕೈ ತಪ್ಪಿದೆ. ಶೋಭಾ ಕರಂದ್ಲಾಜೆ ಅವರನ್ನು ಬೆಂಗಳೂರು ಉತ್ತರಕ್ಕೆ ಅಭ್ಯರ್ಥಿಯನ್ನಾಗಿಸಿದರೆ, ಡಾ. ಮಂಜುನಾಥ್‌ ಅವರನ್ನು ಬೆಂಗಳೂರು ಗ್ರಾಮಾಂತರದಿಂದ ಕಣಕ್ಕಿಳಿಸಲು ಬಿಜೆಪಿ ಹೈ ಕಮಾಂಡ್‌ ಮುಂದಾಗಿದೆ.

ಚಿಕ್ಕೋಡಿ – ಅಣ್ಣಸಾಹೇಬ್ ಶಂಕರ್ ಜೊಲ್ಲೆ ,

ಬಾಗಲಕೋಟೆ – ಪಿಸಿ ಗಡ್ಡಿಗೌಡರ್

ಬಿಜಾಪುರ – ರಮೇಶ್ ಜಿಗಿಜಿಣಗಿ  ,

ಗುಲ್ಬರ್ಗ – ಉಮೇಶ್ ಜಾದವ್ ,

ಬೀದರ್ – ಭಗವತ್ ಖುಬಾ ,

ಕೊಪ್ಪಳ – ಬಸವರಾಜ್ ಕ್ಯಾವತೋರ್

ಬಳ್ಳಾರಿ – ಬಿ ಶ್ರೀರಾಮುಲು

ಹಾವೇರಿ – ಬಸವರಾಜ್ ಬೊಮ್ಮಾಯಿ

ಧಾರವಾಡ – ಪ್ರಹ್ಲಾದ್ ಜೋಶಿ

ದಾವಣಗೆರೆ – ಗಾಯತ್ರಿ ಸಿದ್ದೇಶ್ವರ

ಶಿವಮೊಗ್ಗ – ಬಿ ವೈ ರಾಘವೇಂದ್ರ

ಉಡುಪಿ ಚಿಕ್ಕಮಗಳೂರು – ಕೋಟಾ ಶ್ರೀನಿವಾಸ್ ಪೂಜಾರಿ

ದಕ್ಷಿಣ ಕನ್ನಡ – ಬ್ರಿಜೇಶ್ ಚೌಟಾ

ತುಮಕೂರು – ವಿ ಸೋಮಣ್ಣ

ಮೈಸೂರು – ಯದುವೀರ್ ಕೃಷ್ಣದತ್ತ ಒಡೆಯರ್

ಚಾಮರಾಜನಗರ – ಎಸ್ ಬಾಲರಾಜ್

 

ಬೆಂಗಳೂರು ಗ್ರಾಮಾಂತರ – ಡಾ ಸಿಎನ್ ಮಂಜುನಾಥ್

ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ

ಬೆಂಗಳೂರು ಉತ್ತರ – ಶೋಭಾ ಕರಂದ್ಲಾಜೆ

ಬೆಂಗಳೂರು ಸೆಂಟ್ರಲ್ – ಪಿಸಿ ಮೋಹನ್

key words : bjp ̲ mp ̲ election ̲ ticket