ಮೈಸೂರಲ್ಲಿ ಕೇರಳ ನೊಂದಣಿ ಕಾರು ಚಾಲಕನ ಅಜಾಗರೂಕತೆ :  ನಜ್ಜುಗುಜ್ಜಾದ ಸ್ಕೂಟರ್‌ ಸವಾರನ ಬಲಗಾಲಿನ ಪಾದ.

Kerala registered car driver's negligence in Mysuru: The right foot of a scooter rider was crushed

 

ಮೈಸೂರು, ಅ.22,2024: (www.justkannada.in news) ಇಲ್ಲಿನ ಕೊಲಂಬಿಯ ಏಷಿಯಾ ಆಸ್ಪತ್ರೆ ಸಿಗ್ನಲ್‌ ಜಂಕ್ಷನ್‌ ಬಳಿ ಇಂದು ಬೆಳಗ್ಗೆ ಸಂಭವಿಸಿದ ಕಾರು ಹಾಗೂ ಸ್ಕೂಟರ್‌ ನಡುವಿನ  ರಸ್ತೆ ಅಪಘಾತದಲ್ಲಿ ವ್ಯಕ್ತಿಯ ಕಾಲು ಮುರಿದ ಘಟನೆ ನಡೆದಿದೆ.

ಮೈಸೂರಿನ ಸಾತಗಳ್ಳಿ ನಿವಾಸಿ ಜೆ.ಪಿ.ಆನಂದ ರಾಜೀವ್‌, ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡವರು.

ಘಟನೆ ಹಿನ್ನೆಲೆ:

ಇಂದು ಬೆಳಗ್ಗೆ ೫.೩೦ ರ ಸುಮಾರಿಗೆ ಸೆಕ್ಯೂರಿಟಿ ಗಾರ್ಡ್‌ ಕೆಲಸ ಮಾಡುವ ಆನಂದ್‌ ರಾಜೀವ್‌ ಅವರು ಕೆಲಸಕ್ಕೆಂದು ಮನೆಯಿಂದ ತೆರಳುತ್ತಿದ್ದರು. ಆಗ ಆಸ್ಪತ್ರೆ ಜಂಕ್ಷನ್‌ ಬಳಿ ಬೆಂಗಳೂರು ಕಡೆಯಿಂದ ವೇಗವಾಗಿ ಬಂದ ಕೇರಳ ಮೂಲದ ನೊಂದಣಿಯ ಕಾರು, ಸ್ಕೂಟರ್‌ ಗೆ ಡಿಕ್ಕಿ ಹೊಡೆಯಿತು. ಬಳಿಕ ರಸ್ತೆ ವಿಭಜಕದ ಮೇಲೆ ಹತ್ತಿ ಮರಕ್ಕೆ ಡಿಕ್ಕಿ ಹೊಡೆದು ನಿಂತಿತು.

ಕೂಡಲೇ ಸ್ಥಳದಲ್ಲಿದ್ದ ಆಟೋರಿಕ್ಷಾ ಚಾಲಕರು ಧಾವಿಸಿ ಗಾಯಳು ಸ್ಕೂಟರ್‌ ಸವಾರನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ, ಪೊಲೀಸರಿಗೆ ಮಾಹಿತಿ ನೀಡಿದರು. ಜತೆಗೆ ಮರಕ್ಕೆ ಕಾರು ಡಿಕ್ಕಿ ಹೊಡೆದ ಕಾರಣ ಪರಾರಿಯಾಗಲು ಆಗದ ಕಾರಣ ಕಾರಿನಲ್ಲಿದ್ದವರನ್ನು ಸಹ ಪೊಲೀಸರ ವಶಕ್ಕೆ ಒಪ್ಪಿಸಿದರು.

ಎನ್. ಆರ್.‌ ಸಂಚಾರ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ವಿಚಾರಣೆ ನಡೆಸಿ ಇದೀಗ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಪಘಾತದಿಂದ ಸ್ಕೂಟರ್‌ ಸವಾರರಾದ ಆನಂದ್‌ ರಾಜೀವ್‌ ಅವರ ಬಲಗಾಲಿನ ಪಾದ ಸಂಪೂರ್ಣ ನಜ್ಜುಗುಜ್ಜಾಗಿದ್ದು, ವೈದ್ಯರು ಗಾಯಾಳುವಿನ ಬಲಗಾಲನ್ನು ಕತ್ತರಿಸಿದ್ದಾರೆ. ಘಟನೆಯಲ್ಲಿ ರಾಜೀವ್‌ ಅವರ ತಲೆ ಹಾಗೂ ದೇಹದ ಇತರೆ ಅಂಗಗಳಿಗೂ ತೀವ್ರ ಪೆಟ್ಟಾಗಿದ್ದು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

key words: Kerala registered car, driver’s negligence, in Mysuru, The right foot of a scooter rider was crushed. car accident