ಈ ಬಾರಿ ಚನ್ನಪಟ್ಟಣ ಜನ ಕಾಂಗ್ರೆಸ್ ಕುತಂತ್ರಕ್ಕೆ ಬಲಿಯಾಗಲ್ಲ: ಕೇಂದ್ರ ಸಚಿವ ಹೆಚ್ ಡಿಕೆ

ಬೆಂಗಳೂರು,ಅಕ್ಟೋಬರ್,25,2024 (www.justkannada.in):  ಕಳೆದ ಎರಡು ಬಾರಿ ಕಾಂಗ್ರೆಸ್ ಕುತಂತ್ರದಿಂದ ನಿಖಿಲ್ ಕುಮಾರಸ್ವಾಮಿ ಸೋತರು.ಆದರೆ ಈ ಬಾರಿ ಚನ್ನಪಟ್ಟಣ ಜನ ಕಾಂಗ್ರೆಸ್ ಕುತಂತ್ರಕ್ಕೆ ಬಲಿಯಾಗಲ್ಲ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದರು.

ಇಂದು ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಯ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಲಿದ್ದಾರೆ. ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಈ ಬಾರಿ ಅಲ್ಲಿಯ ಜನರೇ ನಿಖಿಲ್ ಬಗ್ಗೆ ತೀರ್ಮಾನಿಸುತ್ತಾರೆ ಕಾಂಗ್ರೆಸ್ ಕುತಂತ್ರದಿಂದಲೇ ಹಿಂದೆ ನಿಖಲ್ ಸೋತರು.  ಜನತೆ ಆಶೀರ್ವಾದ ಕುತಂತ್ರ ರಾಜಕಾರಣ ಇತ್ತು. ಈ ಬಾರಿ ಕಾಂಗ್ರೆಸ್  ಕುತಂತ್ರಕ್ಕೆ ಚನ್ನಪಟ್ಟಣ ಜನ ಬಲಿಯಾಗಲ್ಲ ಎಂದರು.

3 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ.  ಇದು ದೇಶದ ಗಮನ ಸೆಳೆಯುತ್ತದೆ. ನಾವು ಪ್ರಧಾನಿ ಮೋದಿಯವರ ಕೈ ಬಲಪಡಿಸುತ್ತೇವೆ ಎಂದು ಹೆಚ್.ಡಿ ಕುಮಾರಸ್ವಾಮಿ ನುಡಿದರು.

Key words: Channapatna, people, Nikhil Kumaraswamy, Union Minister, HDK