ಗುತ್ತಿಗೆದಾರರ ಬಿಲ್ ವಿಚಾರವಾಗಿ ಸಿಎಂ ಸುಳ್ಳು ಹೇಳಿದ್ದಾರೆ-ಮಾಜಿ ಸಿಎಂ ಬಸವರಾಜ ಬೊಮ್ಮಾಯಿ.

ಹಾವೇರಿ,ಆಗಸ್ಟ್,12,2023(www.justkannada.in):  ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರರ ಬಿಲ್ ಬಿಡುಗಡೆ ಮಾಡದ ಆರೋಪ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಈ ವಿಚಾರವಾಗಿ ಸಿಎಂ ಸಿದ‍್ಧರಾಮಯ್ಯ ಸುಳ್ಳು ಹೇಳಿದ್ದಾರೆ ಎಂದರು.

ಈ ಕುರಿತು ಮಾತನಾಡಿದ ಅವರು, ನಾವು 3 ವರ್ಷ ಗುತ್ತಿಗೆದಾರರ ಬಿಲ್ ಬಿಡುಗಡೆ ಮಾಡಿದ್ದೇವೆ.  ಮದಲು 6500 ಕೋಟಿ ರೂ. ಬಳಿಕ 657 ಕೋಟಿ ರೂ, ಬಿಡುಗಡೆ ಮಾಡಿದ್ದೇವೆ.  ಗುತ್ತಿಗೆದಾರರ ಬಿಲ್ ಗಳಿಗೂ ಕಮಿಷನ್ ಕೇಳುವುದು ಶುರುವಾಗಿದೆ ಈಗ ಸುಮ್ಮನೆ ತನಿಖೆ ಮಾಡ್ತಿದ್ದೀವೆ ಅಂತಾ ಹೇಳಿದ್ದಾರೆ ಅಷ್ಟೆ ಎಂದು ಕಿಡಿಕಾರಿದರು.

Key words:  CM -lied -about -contractor’s bill – Basavaraja Bommai.