ಕಲುಷಿತ ಆಹಾರ ಸೇವನೆ. ಮೇಘಾಲಯ ರಾಜ್ಯದ ಒರ್ವ ವಿದ್ಯಾರ್ಥಿ ಸಾವು. 25 ಕ್ಕೂ ಹೆಚ್ಚು  ವಿದ್ಯಾರ್ಥಿಗಳು ಅಸ್ಚಸ್ಥ.!

 

ಮಂಡ್ಯ, ಮಾ.16,2025: ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ಕಲುಷಿತ ಆಹಾರ ಸೇವನೆ. ಮೇಘಾಲಯ ರಾಜ್ಯದ ಒರ್ವ ವಿದ್ಯಾರ್ಥಿ ಸಾವು. 25 ಕ್ಕೂ ಹೆಚ್ಚು  ವಿದ್ಯಾರ್ಥಿಗಳು ಅಸ್ಚಸ್ಥ, ಆಸ್ಪತ್ರೆಗೆ ದಾಖಲು .

ಕಲುಷಿತ ಆಹಾರ ಸೇವಿಸಿದ್ದ  ಕೇರ್ ಲಾಂಗ್ (14) ಆಸ್ಪತ್ರೆಯಲ್ಲಿ ಸಾವು. ನೆನ್ನೆ ಪಟ್ಟಣದ ಮದನ್ ಚೌಲ್ಟ್ರಿಯಲ್ಲಿ ಸೇಠು ಸಮುದಾಯದಿಂದ ಹೋಳಿ ಆಚರಣೆ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಪಟ್ಟಣದ ಹೋಟೇಲ್ ನಿಂದ  ಊಟಕ್ಕೆಂದು ಬಾತು ಸರಬರಾಜು ಮಾಡಲಾಗಿತ್ತು. ಹೋಳಿ ಸಂಭ್ರಮದ ಮುಗಿದ ಬಳಿ ಬಾತು ತಿಂದು ಜನರು ಉಳಿದ ಊಟವನ್ನು ಪಕ್ಕದಲ್ಲೆ ಇದ್ದ ಗೋಕುಲ ವಿದ್ಯಾಸಂಸ್ಥೆಯ ಹಾಸ್ಟೆಲ್  ಗೆ ನೀಡಿದ್ದರು.

ಈ ಊಟವನ್ನು ರಾತ್ರಿ ಸೇವಿಸಿದ್ದ 30 ವಿದ್ಯಾರ್ಥಿಗಳು ವಾಂತಿ ಭೇಧಿಯಿಂದ ಅಸ್ವಸ್ಥ..ಇದರಲ್ಲಿ ಓರ್ವ ವಿದ್ಯಾರ್ಥಿ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಸಾವು. ಉಳಿದ ವಿದ್ಯಾರ್ಥಿಗಳಿಗೆ ಆಸ್ಪತ್ರೆಯಲ್ಲಿ ಮುಂದುವರೆದ ಚಿಕಿತ್ಸೆ. ಮಳವಳ್ಳಿ ಆಸ್ಪತ್ರೆಗೆ ಡಿಎಚ್ ಒ ಮೋಹನ್ ಭೇಟಿ, ಮಾಹಿತಿ ಪಡೆದು ಪರಿಶೀಲನೆ.

ರಾತ್ರಿ ಬಾತು ತಿಂದ ಸೇಠು ಸಮುದಾಯದ ಹಲವರು ಅಸ್ಚಸ್ಥದ ಮಾಹಿತಿ. ಮಳವಳ್ಳಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.

key words: Mandya, Consuming contaminated food,  A student of Meghalaya dies. 25 students fall ill

summary: 

Mandya: Consuming contaminated food. A student of Meghalaya state dies. More than 25 students fall ill at malavalli town