ಕ್ರಿಕೆಟ್: ಮಹಾರಾಜ ಟಿ-20 ಟ್ರೋಫಿ 2ನೇ ಆವೃತ್ತಿಗೆ ಇಂದು ಚಾಲನೆ

ಬೆಂಗಳೂರು, ಆಗಸ್ಟ್ 13, 2023 (www.justkannada.in): ಕರ್ನಾಟಕ ಪ್ರೀಮಿಯರ್‌ ಲೀಗ್‌ನ ಹೊಸ ರೂಪ ಕೆಎಸ್‌ಸಿಎ ಮಹಾರಾಜ ಟಿ-20 ಟ್ರೋಫಿ 2ನೇ ಆವೃತ್ತಿಗೆ ಇಂದು ಚಾಲನೆ ಸಿಗಲಿದೆ.

ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಗುಲ್ಬರ್ಗಾ ಮಿಸ್ಟಿಕ್ಸ್‌-ಬೆಂಗಳೂರು ಬ್ಲಾಸ್ಟರ್ಸ್‌, 2ನೇ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್‌-ಮೈಸೂರು ವಾರಿಯರ್ಸ್‌ ಮುಖಾಮುಖಿಯಾಗಲಿವೆ.

ಈ ಕೂಟದಲ್ಲಿ ಎರಡು ಹೊಸ ತಂಡಗಳು ಕಾಣಿಸಿಕೊಳ್ಳಲಿವೆ. ಶಿವಮೊಗ್ಗ ಲಯನ್ಸ್‌, ಮಂಗಳೂರು ಡ್ರ್ಯಾಗನ್ಸ್‌ ಸೋಮವಾರ ಪರಸ್ಪರ ಮುಖಾಮುಖಿ ಆಗಲಿವೆ.

ಮಾಯಾಂಕ್‌ ಅಗರ್ವಾಲ್‌, ಕರುಣ್‌ ನಾಯರ್‌, ಮನೀಷ್‌ ಪಾಂಡೆ ಅವರಂತಹ ಸ್ಟಾರ್ ಆಟಗಾರರು ಮಹಾರಾಜ ಟಿ-20 ಟ್ರೋಫಿ ಪಂದ್ಯಾವಳಿಯಲ್ಲಿ ಆಡುತ್ತಿರುವುದು ಕ್ರಿಕೆಟ್ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.