ಸಾಲ ತೀರಿಸಲಾಗದೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ.!

Unable to repay loan, family of 3 dies by suicide in Haasan

 

ಬೆಂಗಳೂರು, ಆ,15,2024: (www.justkannada.in news) ಹೇಮಾವತಿ ನಾಲೆಗೆ ಹಾರಿ ಒಂದೇ ಕುಟುಂಬದ ಮೂವರ ಮೃತಪಟ್ಟ ಘಟನೆ ವರದಿಯಾಗಿದೆ.

ಮೃತರನ್ನು 43 ವರ್ಷದ ಶ್ರೀನಿವಾಸ್, 36 ವರ್ಷದ ಶ್ವೇತಾ ಮತ್ತು ಅವರ 13 ವರ್ಷದ ಮಗಳು ಎಂದು ಗುರುತಿಸಲಾಗಿದೆ.

ಶ್ರೀನಿವಾಸ್ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಪತ್ನಿ ಶ್ವೇತಾ ಶಾಲಾ ಶಿಕ್ಷಕಿ. ಸಾಲ ತೀರಿಸಲಾಗದೆ ಕುಟುಂಬಸ್ಥರು ಹಾರಿ ಪ್ರಾಣ ಬಿಟ್ಟಿದ್ದಾರೆ.

ಈ ಕುಟುಂಬ  ಹಲವು ದಿನಗಳಿಂದ ನಾಪತ್ತೆಯಾಗಿದ್ದು, ಅವರ ಸಂಬಂಧಿಕರು ಆಗಸ್ಟ್ 13 ರಂದು ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಭಾನುವಾರ (ಆಗಸ್ಟ್ 11) ಕುಟುಂಬವು ಅವರ ಮನೆಯಿಂದ ನಾಪತ್ತೆಯಾಗಿತ್ತು.

ವ್ಯಾಪಕ ಹುಡುಕಾಟದ ನಂತರ, ಶ್ರೀನಿವಾಸ್‌ ಮತ್ತು ಶ್ವೇತಾ ದಂಪತಿಗಳ ಮೃತದೇಹ,  ಆತ್ಮಹತ್ಯೆ ಸ್ಥಳದಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ಬಾಗೂರು ಹೋಬಳಿಯ ಕಾಲುವೆಯ ಬಳಿ ಪತ್ತೆ.  ಅವರ ಮಗಳ ಮೃತದೇಹ ಇನ್ನೂ ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಪೊಲIಸ್‌ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

key words: Unable to, repay loan, family of, 3 dies, by suicide, in Haasan