ಫೆ.24 ರಂದು ಮೈಸೂರಿನಲ್ಲಿ ಜನಾಂದೋಲನ ಜಾಥಾ, ಮೌನ ಪ್ರತಿಭಟನೆ.

ಮೈಸೂರು,ಫೆಬ್ರವರಿ,19,2025 (www.justkannada.in): ಅವಹೇಳನಕಾರಿ ಪೋಸ್ಟ್ ಮತ್ತು ಉದಯಗಿರಿ ಗಲಭೆ ಪ್ರಕರಣ ಸಂಬಂಧ ಮೈಸೂರಿನಲ್ಲಿ ಫೆಬ್ರವರಿ 24 ರಂದು ಮೈಸೂರು ಜನಜಾಗೃತಿ ಸಮಿತಿ ವತಿಯಿಂದ ಜನಾಂದೋಲನ ಜಾಥಾ ಮತ್ತು ಮೌನಪ್ರತಿಭಟನೆಯನ್ನ ಹಮ್ಮಿಕೊಳ್ಳಲಾಗಿದೆ.

ಮೈಸೂರಿನ ಗನ್‌ಹೌಸ್‌ ನ ಬಳಿಯಿಂದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ಮೌನ ಪ್ರತಿಭಟನೆ ನಡೆಸಿ, ಸಮಾರೋಪ ಸಮಾವೇಶವನ್ನು ಮಾಡಲು  ತೀರ್ಮಾನಿಸಲಾಗಿದೆ ಎಂದು ಮೈಸೂರು ಜನಜಾಗೃತಿ ಸಮಿತಿ ತಿಳಿಸಿದೆ.

ಘಟನೆ ನಡೆದು 10 ದಿನಗಳಾದರೂ, ಎಲ್ಲವೂ ಶಾಂತಿಯುತವಾಗಿದ್ದರೂ, ಕೆಲ ಕಿಡಿಗೇಡಿಗಳು ಮತ್ತೊಮ್ಮೆ ಕಿಡಿ ಹಚ್ಚಲು ಸಂಚು ರೂಪಿಸುತ್ತಿದ್ದಾರೆ. ಈ ಕಿಡಿಗೇಡಿಗಳ ಉದ್ದೇಶ ಹಿಂದೂ ಮುಸ್ಲಿಂರವರಿಗೆ ಜಗಳ ತಂದಿಡಬೇಕು ಎನ್ನುವ ಉದ್ದೇಶದಿಂದ ಹೀಗೆ ಮಾಡುತ್ತಿದ್ದಾರೆ. ಆದ್ದರಿಂದ ಮೈಸೂರಿನ ಜನರು ಶಾಂತಿಯನ್ನ ಬಯಸುತ್ತಾರೆ ಮತ್ತು ಸರ್ಕಾರ ಮತ್ತು ಕಾನೂನು ಹಾಗೂ ಪೊಲೀಸ್‌ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿರುತ್ತಾರೆ ಎಂದು ನಿರೂಪಿಸಲು ಈ ಬೃಹತ್ ಮೌನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ಹೆಚ್ಚಿನ ಜನರು ಭಾಗವಹಿಸಿ ಶಾಂತಿ ಮೆರವಣಿಗೆ ಯಶಸ್ವಿಗೊಳಿಸುವಂತೆ ಮೈಸೂರು ಜನಜಾಗೃತಿ ಸಮಿತಿ ಸದಸ್ಯರು ಮನವಿ ಮಾಡಿದ್ದಾರೆ.

Key words: Uadayagiri roit case, Janandola rally , Mysore