ನಾನೇ ಕನಕಪುರಕ್ಕೆ ಬಂದು ಅಹವಾಲು ಸ್ವೀಕರಿಸುವೆ: ನೀವು ಬರೋದು ಬೇಡ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಆಗಸ್ಟ್,8,2024 (www.justkannada.in):  ಡಿಸಿಎಂ ಡಿಕೆ ಶಿವಕುಮಾರ್ ತನ್ನ ಕ್ಷೇತ್ರ ಕನಕಪುರದ ಜನರ ಭೇಟಿಗೆ ಸಮಯ ನಿಗದಿ ಮಾಡಿದ್ದಾರೆ. ಕ್ಷೇತ್ರದ ಜನರು ತಮ್ಮ ಮನವಿಯನ್ನ ಹೊತ್ತು ಬೆಂಗಳೂರಿಗೆ ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ಇದೀಗ ತಾನೇ ಕ್ಷೇತ್ರಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸುವುದಾಗಿ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಡಿಸಿಎಂ ಡಿಕೆ ಶಿವಕುಮಾರ್,  ಕನಕಪುರ ಕ್ಷೇತ್ರದ ಜನತೆ ಮನವಿಯನ್ನು ಹೊತ್ತು ಬೆಂಗಳೂರಿಗೆ ಬರುವುಉ ಬೇಡ. ನಾನೇ ಕನಕಪುರಕ್ಕೆ ಬಂದು  ಕ್ಷೇತ್ರದ ಜನತೆಯ ಸಮಸ್ಯೆ ಆಲಿಸುತ್ತೇನೆ.  ನಾನು ಕನಕಪುರ ಬಂದು ನಿಮ್ಮ ಕಷ್ಟ ಸುಖ ವಿಚಾರಿಸುತ್ತೇನೆ  ಪ್ರತಿ ತಿಂಳಗಳು 2ನೇ ಮತ್ತು 3ನೇ ಶನಿವಾರ ಕನಕಪುರಕ್ಕೆ ಭೇಟಿ ನೀಡಿ ಅಹವಾಲು ಸ್ವೀಕರಿಸುತ್ತೇನೆ  ಎಂದು ತಿಳಿಸಿದ್ದಾರೆ.

Key words:  Kanakapur, people, DCM, DK Shivakumar