ಬೆಂಗಳೂರು. ಏ.1.,2025: ಗ್ಯಾಸ್ ಸಿಲೆಂಡರ್ ಸ್ಪೋಟದಿಂದ ಸಂಭವಿಸಿದ ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದ ಕೊರಗಜ್ಜ ಆರಾಧಕ ಚಿಕಿತ್ಸೆಗೆ ಸ್ಪಂಧಿಸಿದೆ ಮೃತಪಟ್ಟಿದ್ದಾರೆ. ಮಂಗಳೂರು ಮೂಲದ ರಾಜೇಶ್ ಕೋಟಿಯನ್ (40) ಮೃತ ವ್ಯಕ್ತಿ.
ಘಟನೆ ಹಿನ್ನೆಲೆ:
ಮಂಗಳೂರಿನಲ್ಲಿ ಕೊರಗಜ್ಜ ದೇವಸ್ಥಾನದ ಆರಾಧಕರಾಗಿದ್ದ ರಾಜೇಶ್, ಕಳೆದ ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಆಗಮಿಸಿ ಇಲ್ಲಿನ ಯೂನೈಟಡ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು.
ಭಾನುವಾರ ಇಲ್ಲಿನ ರಾಮಚಂದ್ರಪುರಂನ ತಮ್ಮ ಬಾಡಿಗೆ ಮನೆಯಲ್ಲಿ ಮಲಗಿದ್ದಾಗ ಅಡುಗೆ ಸಿಲೆಂಡರನಲ್ಲಿ ಗ್ಯಾಸ್ ಸೋರಿಕೆಯಾಗಿ ಅಗ್ನಿ ಅವಘಡ ಸಂಭವಿಸಿತ್ತು. ಈ ಘಟನೆಯಲ್ಲಿ ಗಾಯಗೊಂಡಿದ್ದ ರಾಜೇಶ್ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು ಸಂಜೆ 4 ಗಂಟೆಯಲ್ಲಿ ಮೃತಪಟ್ಟಿದ್ದಾರೆ.
ಇವರ ವಾರಸುದಾರರ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕಾರಣ, ಪರಿಚಿತರು ಸಂಬಂಧಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಆದ್ದರಿಂದ, ಮೃತರ ಬಗ್ಗೆ ಮಾಹಿತಿ ಬೇಕಾದಲ್ಲಿ ಮೊಬೈಲ್ ದೂರವಣಿ ಸಂಖ್ಯೆ : 9740899413 ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.
key words: Fire accident, Koragajja worshipper, bangalore,
Fire accident: Koragajja worshipper dies without responding to treatment.