ಸಿಎಂ ಸಿದ್ದರಾಮಯ್ಯ ಯುಟರ್ನ್ ಎಂಬ ಹೇಳಿಕೆಗೆ ಸಚಿವ ಸಂತೋಷ್ ಲಾಡ್ ತಿರುಗೇಟು

ಧಾರವಾಡ, ಅಕ್ಟೋಬರ್,2,2024 (www.justkannada.in):  ಸೈಟ್ ವಾಪಸ್ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಯುಟರ್ನ್ ಸಿಎಂ ಸಿದ್ದರಾಮಯ್ಯ ಎಂದಿದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಸಂತೋಷ್ ಲಾಡ್,  ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಸೈಟ್ ವಾಪಸ್ ಕೊಟ್ಟರೆ ತಪ್ಪೇನಿದೆ. ವಾಪಸ್ ಕೊಡಬಾರದು ಅಂತಾ ರೂಲ್ಸ್ ಇದೆಯಾ? ಮರ್ಯಾದೆಗೋಸ್ಕರ  ಸಿಎಂ ಪತ್ನಿ 14 ಸೈಟ್ ವಾಪಸ್ ನೀಡಿದ್ದಾರೆ.  ಅದಕ್ಕೆ ಸಿಎಂ ಯುಟರ್ನ್ ಅನ್ನೋದು ಸರಿಯಲ್ಲ ಎಂದು ಕಿಡಿಕಾರಿದರು.

ಮುಡಾ ಕೇಸ್ ನಲ್ಲಿ ಇಡಿ ಎಂಟ್ರಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸಂತೋಷ್ ಲಾಡ್, ಇಡಿ ಎಂಟ್ರಿ ಆಗೋಕೆ ಅವ್ಯವಹಾರ ಎಲ್ಲಿದೆ. ಚುನಾವಣಾ ಬಾಂಡ್ ನಲ್ಲಿ ಹಗರಣ ನಡೆದಿದೆ.  ಚುನಾವಣಾ ಬಾಂಡ್ ಕೇಸ್ ನಲ್ಲಿ ಇಡಿ ಯಾಕೆ ಎಂಟ್ರಿ  ಕೊಟ್ಟಿಲ್ಲ ಎಂದು ಪ್ರಶ್ನಿಸಿದರು.

Key words: Minister, Santosh Lad, CM Siddaramaiah, muda case