ದಸರಾ ಮಹೋತ್ಸವ: ಸೆ. 5ಕ್ಕೆ ಮೈಸೂರಿಗೆ ಎರಡನೇ ಹಂತದ ಗಜಪಡೆ

ಮೈಸೂರು,ಸೆಪ್ಟಂಬರ್,3,2024 (www.justkannada.in): 2024ರ ಮೈಸೂರು ದಸರಾ ಮಹೋತ್ಸವಕ್ಕೆ ಭರದ ಸಿದ್ದತೆ ನಡೆಯುತ್ತಿದ್ದು  ಎರಡನೇ ಹಂತದ ಗಜಪಡೆ  ಸೆಪ್ಟಂಬರ್ 5ಕ್ಕೆ ಮೈಸೂರಿಗೆ ಆಗಮಿಸಲಿದೆ.

ಈಗಾಗಲೇ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಮೊದಲ ಹಂತದ ದಸರಾ ಗಜಪಡೆ ಮೈಸೂರಿಗೆ ಆಗಮಿಸಿ ಅರಮನೆ ಆವರಣದಲ್ಲಿ ಬೀಡುಬಿಟ್ಟಿದೆ. ಉಳಿದ 5 ಆನೆಗಳನ್ನ ಸೆಪ್ಟಂಬರ್ 5ರಂದು ಕರೆತರಲು ಸಿದ್ದತೆ ನಡೆದಿದೆ.

ಈ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಹೆಚ್ಚುವರಿ ಗಜಪಡೆ, ಕಾವಾಡಿ, ಮಾವುತರಿಗಾಗಿ ತಂಗುದಾನ ನಿರ್ಮಾಣ ಮಾಡಲಾಗುತ್ತಿದೆ.  ಆನೆಗಳ ವಾಸ್ತವ್ಯಕ್ಕೆ ಹೆಚ್ಚುವರಿ ತಾತ್ಕಾಲಿಕ ಶೆಡ್ ನಿರ್ಮಾಣ ಕಾರ್ಯದಲ್ಲಿ ಕಾರ್ಮಿಕರು ಬ್ಯುಸಿಯಾಗಿದ್ದಾರೆ.

ಅರಮನೆಯ ಎಡ ಭಾಗದ ಆವರಣದಲ್ಲಿ ಕಾವಾಡಿ, ಮಾವುತರ ಕುಟುಂಬ ತಂಗಲು ಒಂದೊಂದು ಕುಟುಂಬಕ್ಕೆ ಪ್ರತ್ಯೇಕ ತಾತ್ಕಾಲಿಕ ಮನೆಗಳ ನಿರ್ಮಾಣ ಮಾಡಲಾಗಿದೆ.  ಸುಮಾರು 30 ರಿಂದ 40 ಕುಟುಂಬ ಇರಲು ಅನುಕೂಲವಾಗುವಂತ ಶೆಡ್ ಗಳನ್ನ ನಿರ್ಮಾಣ ಮಾಡಲಾಗುತ್ತಿದೆ. ಶೆಡ್ ಗಳನ್ನ ಮಳೆ, ಬಿಸಿಲು, ಗಾಳಿಯಿಂದ ರಕ್ಷಣೆ ಮಾಡುವಂತೆ ನಿರ್ಮಿಸಲಾಗುತ್ತಿದೆ.  ಈಗಾಗಲೇ ದಸರಾ ಗಜಪಡೆ ಆನೆಗಳಿಗೆ ತಾಲೀಮು ನಡೆಸುವ ಪ್ರಕ್ರಿಯೆ ಆರಂಭವಾಗಿದೆ.

Key words: mysore Dasara, Sep 5, second gajapade