ಇದು ಜೆಡಿಎಸ್-ಬಿಜೆಪಿ ಗೆಲುವಲ್ಲ: ಜಾತಿ ,ಧರ್ಮ, ಅಸೂಯೆಯ ಗೆಲುವು-ಮಾಜಿ ಸಂಸದ ಡಿ.ಕೆ ಸುರೇಶ್

ರಾಮನಗರ,ಜೂನ್,10,2024 (www.justkannada.in):  ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ ಮಾಜಿ ಸಂಸದ ಡಿ.ಕೆ ಸುರೇಶ್,  ತಮ್ಮ ಸೋಲಿನ ಬಗ್ಗ ಪ್ರತಿಕ್ರಿಯಿಸಿದ್ದಾರೆ.

ಇದು ಜೆಡಿಎಸ್-ಬಿಜೆಪಿ ಮೈತ್ರಿ ಗೆಲುವಲ್ಲ. ಜಾತಿ ,ಧರ್ಮ, ಅಸೂಯೆಯ ಗೆಲುವು ಎಂದು ಮಾಜಿ ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಡಿ.ಕೆ ಸುರೇಶ್, ನಾನು ಬೆಂಗಳೂರು ಗ್ರಾಮಾಂತರದಲ್ಲಿ 10 ವರ್ಷ ಸಂಸದನಾಗಿ ಕೆಲಸ ಮಾಡಿದ್ದೇನೆ.  ಎಲ್ಲರೂ ಸಹಕಾರ ಪ್ರೋತ್ಸಾಹ ಕೊಟ್ಟಿದ್ದಾರೆ. ನಾನು ರಾಮನಗರ ಅಭಿವೃದ್ಧಿಗೆ ಶ್ರಮಿಸಿದ್ದೇನೆ.  ಕನ್ನಡ ಪರ ಹೋರಾಟ ಮಾಡಿದ್ದೇನೆ. ಜನರು ನನಗೆ ವಿರಾಮ ನೀಡಿದ್ದಾರೆ. ಸೋಲನ್ನ ಸಂತೋಷದಿಂದಲೆ ಸ್ವೀಕಾರ ಮಾಡುತ್ತೇನೆ.  ಇದು ಪಕ್ಷದ ಗೆಲುವಲ್ಲ ಜಾತಿ ಧರ್ಮ ಅಸೂಯೆಯ ಗೆಲುವು ಎಂದರು.

Key words: not, JDS-BJP, victory, DK Suresh