ಗ್ಯಾರಂಟಿ ರದ್ದು ಮಾಡುವಂತೆ ಕೇಂದ್ರಕ್ಕೆ ಪತ್ರ: ಶಾಸಕ ಯತ್ನಾಳ್ ವಿರುದ್ದ ಪರಮೇಶ್ವರ್ ಕಿಡಿ

ಬೆಂಗಳೂರು,ಜುಲೈ,8,2024 (www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನ ರದ್ದು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ವಿರುದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್,  ಜನ ನಮ್ಮನ್ನ ಆರಿಸಿದ್ದಾರೆ. ಯತ್ನಾಳ್ ರನ್ನಲ್ಲ. ಗ್ಯಾರಂಟಿಗಳ ಸಾಧಕ ಬಾಧಕಗಳನ್ನ ನಾವೇ ನೋಡ್ತೇವೆ  ಸಮಸ್ಯೆ ಬಂದರೇ ನಾವೇ ಪರಿಹಾರ ನೀಡುತ್ತೇವೆ ನಮಗೆ ಬಿಜೆಪಿಯವರ ಸಲಹೆ ಸೂಚನೆ ಬೇಕಿಲ್ಲ ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಕಾಂಗ್ರೆಸ್ ಸರಕಾರ ಐದು ಗ್ಯಾರಂಟಿ ಯೋಜನೆಗಳನ್ನ ಜಾರಿಗೊಳಿಸಿದ್ದು , ಈ ಮಧ್ಯೆ ಈ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿಗೆ ತೊಂದರೆಯಾಗುತ್ತಿದೆ ಎಂಬ ಆರೋಪಗಳೂ ಕೇಳಿ ಬಂದಿದೆ.

Key words: Yatnal, Letter, center, cancel, guarantee, Parameshwar